ಬೈಂದೂರು :ಬೂತ್ ಮಟ್ಟದಲ್ಲಿ ಕೆಲಸ ಮಾಡಿದರೆ ಗೆಲುವು ನಮ್ಮದೇ : ರಾಷ್ಟ್ರೀಯ ಕಾಂಗ್ರೆಸ್ ಕಾರ್ಯದರ್ಶಿ ರೋಝೀ ಜಾನ್

0
446

Click Here

Click Here

ಕುಂದಾಪುರ ಮಿರರ್ ಸುದ್ದಿ…

Video:

ಕುಂದಾಪುರ: ಚುನಾವಣಾ ತಯಾರಿಗೆ ಇದು ಮಹತ್ವಪೂರ್ಣ ಸಮಯ. ಬೈಂದೂರು ವಿಧಾನಸಭಾ ಕ್ಷೇತ್ರದ 248 ಭೂತ್‍ಗಳಲ್ಲಿಯೂ ಕಾರ್ಯಕರ್ತರು ಪ್ರವೃತ್ತರಾಗಬೇಕು. ಬೂತ್ ಮಟ್ಟದಲ್ಲಿ ಕೆಲಸ ಮಾಡಿದರೆ ಮಾತ್ರ ನಾವು ಅಧಿಕಾರಕ್ಕೆ ಬರಲು ಸಾಧ್ಯ ಎಂದು ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್‍ನ ಕಾರ್ಯದರ್ಶಿ, ಮೈಸೂರು ವಿಭಾಗದ ಕಾಂಗ್ರೆಸ್ ಉಸ್ತುವಾರಿ ರೋಝಿ ಜಾನ್ ಹೇಳಿದರು.

ಅವರು ಸೋಮವಾರ ಕೊಲ್ಲೂರಿನ ಎಎನ್‍ಆರ್ ಅತಿಥಿಗೃಹದಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬೈಂದೂರು ಹಾಗೂ ವಂಡ್ಸೆ ಬ್ಲಾಕ್ ಕಾಂಗ್ರೆಸ್ ಪಕ್ಷದ ನಾಯಕರ ಹಾಗು ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.

ರಾಜ್ಯ ಬಿಜೆಪಿ ಸರ್ಕಾರ ಅಭಿವೃದ್ದಿ ಕೆಲಸಗಳ ಕುರಿತು ಮಾತನಾಡುತ್ತಿಲ್ಲ. ಕೇವಲ 40 ಪರ್ಸೆಂಟ್ ಕಮಿಶನ್ ಒಳಗೆ ಮುಳುಗಿ ಹೋಗಿರುವ ಸರ್ಕಾರವನ್ನು ಕಿತ್ತೆಸೆಯುವ ಕಾಲ ಬಂದಿದೆ. ರಾಜ್ಯಕ್ಕೆ ಬಿಜೆಪಿ ಸರ್ಕಾರದ ಕೊಡುಗೆ ಶೂನ್ಯ. ಜನರಿಗೆ ಬಿಜೆಪಿ ಸರ್ಕಾರದ ಹಿಡನ್ ಅಜೆಂಡಾ ಗೊತ್ತಾಗಿದೆ. ಕಾಂಗ್ರೆಸ್‍ನಿಂದ ಮಾತ್ರ ರಾಜ್ಯದ ಅಭಿವೃದ್ದಿ ಸಾಧ್ಯ ಎನ್ನುವುದು ಜನರಿಗೆ ತಿಳಿದಿದೆ. ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಿದರೆ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುವುದರಲ್ಲಿ ಯಾವುದೇ ಸಂದೇಹವಿಲ್ಲ. ಎಲ್ಲರೂ ಒಗ್ಗಟ್ಟಾಗಿ ಚುನಾವಣೆಯನ್ನು ಎದುರಿಸೋಣ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.

Click Here

ಬೈಂದೂರಿನಲ್ಲಿ ಕೆ.ಗೋಪಾಲ ಪೂಜಾರಿ ಒಬ್ಬರೇ ಚುನಾವಣೆ ಆಕಾಂಕ್ಷಿಯಾಗಿ ಅರ್ಜಿ ಸಲ್ಲಿಸಿದ್ದು, ಬೈಂದೂರಿನ ಕಾಂಗ್ರೆಸ್ ನಾಯಕರ ಒಗ್ಗಟ್ಟನ್ನು ತೋರಿಸುತ್ತದೆ. ಬೈಂದೂರಿನಲ್ಲಿ ಗೆದ್ದರೆ ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತೇವೆ ಎಂದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ್ ಮಾತನಾಡಿ, ರಾಜ್ಯದಲ್ಲಿ 37ಲಕ್ಷ ಮತದಾರರ ಮತದಾನವನ್ನು ಕಸಿಯುವ ಕೆಲಸವನ್ನು ಬಿಜೆಪಿ ಸರ್ಕಾರ ಮಾಡಿದೆ. ಈಗಾಗಲೇ ಇಬ್ಬರು ಐಎಎಸ್ ಅಧಿಕಾರಿಗಳನ್ನು ಕೇಂದ್ರ ಚುನಾವಣಾ ಆಯೋಗ ವಜಾಗೊಳಿಸಿದೆ. ಬೆಂಗಳೂರು ನಗರದಲ್ಲೇ 7 ಲಕ್ಷ ಮತದಾರರ ಹಕ್ಕನ್ನು ಕಸಿಯಲಾಗಿದೆ. ಒಂದು ಮತದಿಂದ ಗೆದ್ದು ಶಾಸಕನಾದವನು ನಾನು. ಆ ಒಂದು ಮತದ ಪ್ರಾಮುಖ್ಯತೆ ಏನೆನ್ನುವುದು ನನಗೆ ತಿಳಿದಿದೆ. ಹೀಗಾಗಿ ಒಂದೊಂದು ಮತವೂ ನಮಗೆ ಅತ್ಯವಶ್ಯಕ. ಪ್ರತೀ ಮತವನ್ನೂ ಎಚ್ಚರಿಕೆಯಿಂದ ಕಾಪಾಡಿಕೊಳ್ಳುವ ಹೊಣೆ ನಮ್ಮೆಲ್ಲರದ್ದು ಎಂದರು.

ಎಲ್ಲಾ ಕ್ಷೇತ್ರಗಳಲ್ಲಿಯೂ ಚುನಾವಣಾ ಆಕಾಂಕ್ಷಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಆದರೆ ಬೈಂದೂರಿನಲ್ಲಿ ನಮಗೆ ಅಂತಹ ಸಮಸ್ಯೆ ಇಲ್ಲ. ಇದಕ್ಕಾಗಿ ಇಲ್ಲಿನ ಮುಖಂಡರಿಗೆ ನಾನು ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಕಷ್ಟಪಟ್ಟು ರಾಜಕಾರಣಕ್ಕೆ ಬಂದು ನಾಲ್ಕು ಬಾರಿ ಜಯ ಗಳಿಸಿದವರು ಗೋಪಾಲ ಪೂಜಾರಿಯವರು. ಕರಾವಳಿಯಲ್ಲಿ ಧಾರ್ಮಿಕವಾಗಿ ಪ್ರದೋದಿಸಿ ಮತ ಗಳಿಸಿಕೊಳ್ಳುವವರ ಮುಂದೆ ನಾಲ್ಕು ಬಾರಿ ಶಾಸಕರಾಗುವುದು ಸಾಮಾನ್ಯದ ಮಾತಲ್ಲ. ಗೋಪಾಲ ಪೂಜಾರಿಯವರ ಶಾಸಕತ್ವದ ಅವಧಿಯಲ್ಲಾದ ಅಭಿವೃದ್ದಿಗಳನ್ನು ಇಟ್ಟುಕೊಂಡು ಚುನಾವಣೆಯನ್ನು ಎದುರಿಸಬೇಕು ಎಂದರು.

ಬಿಜೆಪಿಗೆ ಇಂದು ಜನರೆದುದುರು ಬರುವ ಯಾವುದೇ ನೈತಿಕತೆ ಇಲ್ಲ. ಅಭಿವೃದ್ದಿ ವಿಚಾರಗಳ ಕುರಿತು ಮಾತನಾಡದೆ ಧಾರ್ಮಿಕ ಭಾವನೆ ಕೆರಳಿಸುವ, ಸಿದ್ರಾಮುಲ್ಲಾಖಾನ್ ಎಂಬುದರ ಮೂಲಕ ನಮ್ಮ ನಾಯಕರನ್ನು ನಿಂದನೆ ಮಾಡುವ ಕೆಲಸ ನಡೆಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಮಾತನಾಡಿ, ಚಿಕಿತ್ಸೆಗೊಳಗಾಗಿ ಮನೆಯಲ್ಲೇ ಕೂತ ಮೂರು ತಿಂಗಳು ಪಕ್ಷಭೇದ ಮರೆತು ವಿವಿಧ ರಾಜಕೀಯ ಮುಖಂಡರುಗಳು ನನ್ನ ಮನೆಗೆ ಬಂದು ಆರೋಗ್ಯವನ್ನು ವಿಚಾರಿಸಿದ್ದಾರೆ. ಸಹಸ್ರಾರು ಸಂಖ್ಯೆಯಲ್ಲಿ ನಮ್ಮ ಕ್ಷೇತ್ರದ ಜನರು ನನ್ನನ್ನು ನೋಡಲು ಬಂದಿದ್ದಾರೆ. ಸೋತ ಸಂದರ್ಭದಲ್ಲಿಯೂ ನನ್ನ ನೋವಿನ ದಿನಗಳಲ್ಲಿ ಕ್ಷೇತ್ರದ ಜನರು ನನ್ನ ಆರೋಗ್ಯ ವಿಚಾರಿಸುವ ಮೂಲಕ ಅವರ ಹೃದಯದಲ್ಲಿ ನನಗೆ ಒಂದಿಂಚಾದರೂ ಜಾಗ ಕೊಟ್ಟಿದ್ದಾರೆ ಎನ್ನುವುದು ಸಂತಸದ ವಿಚಾರ ಎಂದರು.

ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಕೆಪಿಸಿಸಿ ಕಾರ್ಯದರ್ಶಿ ಎಂ. ಎ ಗಫೂರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕೊಡವೂರು, ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮದನ್ ಕುಮಾರ್, ವಂಡ್ಸೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರದೀಪ್ ಕುಮಾರ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ರಾಜು ಪೂಜಾರಿ, ಕೆಪಿಸಿಸಿ ಸದಸ್ಯರಾದ ಪ್ರಕಾಶ್ಚಂದ್ರ ಶೆಟ್ಟಿ, , ಮುಖಂಡರಾದ ರಮೇಶ್ ಗಾಣಿಗ, ಪ್ರಸನ್ನ ಕುಮಾರ್, ಅರುಣ್ ಕುಮಾರ್ ಶೆಟ್ಟಿ ಮೊದಲಾದವರು ಇದ್ದರು.

Click Here

LEAVE A REPLY

Please enter your comment!
Please enter your name here