ಕುಂದಾಪುರದಲ್ಲಿ ಮತ್ತೆ ಅರಳಿದ ಕಮಲ ಹಾಲಾಡಿ ಆಪ್ತ ಕಿರಣ್ ಕೊಡ್ಗಿ ಶಾಸನ ಸಭೆಗೆ ಆಯ್ಕೆ

0
340

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಈ ಬಾರಿಯ ಚುನಾವಣೆ ಅದೆಷ್ಟು ಇಂಟರೆಸ್ಟಿಂಗ್ ಆಗಿತ್ತೆಂದರೆ ಕುಂದಾಪುರದಲ್ಲಿ ಇನ್ನೇನು ಕಾಂಗ್ರೆಸ್ ಗೆದ್ದೇ ಬಿಟ್ಟಿತು ಎನ್ನುವಷ್ಟರ ಮಟ್ಟಿಗೆ ಹವಾ ಎಬ್ಬಿಸಿದ್ದು ಸುಳ್ಳಲ್ಲ. ಆದರೆ ಕೊನೇ ಘಳಿಗೆಯವರೆಗೂ ತನ್ನ ಚುನಾವಣೆಯಲ್ಲಿ ನಡೆಸದೇ ಇದ್ದಷ್ಟು ಪ್ರಚಾರ ನಡೆಸಿ ತನ್ನಾಪ್ತನನ್ನು ಗೆಲ್ಲಿಸಿಯೇ ಸಿದ್ಧ ಎಂದು ಪಣ ತೊಟ್ಟ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರ ಶ್ರಮಕ್ಕೆ ಫಲ ದೊರಕಿದೆ. ಪರಿಣಾಮವಾಗಿ ಕುಂದಾಪುರದಲ್ಲಿ ಮತ್ತೆ ಬಜೆಪಿ ತನ್ನ ಕಮಲದ ಹೂವನ್ನು ಅರಳಿಸುವಲ್ಲಿ ಹಾಲಾಡಿ ಒಪ್ಪಿಕೊಂಡ ಕೆಲಸವನ್ನು ಪ್ರಾಮಾಣಿಕವಾಗಿ ಪೂರೈಸಿದ್ದಾರೆ.

Click Here

ಕಿರಣ್ ಕೊಡ್ಗಿ, ಅಪ್ಪಟ ಸಂಘಟನಾ ಚತುರ. ನಾಯಕತ್ವ ಗುಣವನ್ನು ಹೊಂದಿಲ್ಲದಿದ್ದರೂ ಕಾರ್ಯಕರ್ತರ ಜೊತೆಗಿನ ಸಂಬಂಧ, ಶಾಸಕ ಹಾಲಾಡಿಯವರ ಜೊತೆಗಿನ ವಿಧೇಯತೆ, ಹಾಲಾಡಿಗೆ ತನ್ನ ಸಹೋದರನ ಸಹಪಾಠಿ ಕಿರಣ್ ಕೊಡ್ಗಿಗೆ ಸೀಟು ಕೊಡಿ ಗೆಲ್ಲಿಸಿಕೊಡುವ ಜವಾಬ್ಧಾರಿ ನನ್ನದು ಎಂದು ನೀಡಿದ್ದ ಅಭಯವನ್ನು ಹಾಲಾಡಿ ಪೂರೈಸಿದಂತಾಗಿದೆ. ಪರಿಣಾಮವಾಗಿ 1 ಲಕ್ಷದ 1 ಸಾವಿರದ 102 ಮತಗಳನ್ನು ಪಡೆದು ಜಯಶಾಲಿಯಾಗಿದ್ದಾರೆ. ಕುಂದಾಪುರ ಕ್ಷೇತ್ರದಲ್ಲಿ ಒಟ್ಟು 165414 ಮತಗಳು ಚಲಾವಣೆಯಾಗಿದ್ದು, ಕಾಂಗ್ರೆಸ್ಸಿನ ದಿನೇಶ್ ಹೆಗ್ಡೆ ಮೊಳಹಳ್ಳಿ 60172 ಮತಗಳನ್ನು ಪಡೆದರು. ಜೆಡಿಎಸ್‍ನ ರಮೇಶ್ 1029 ಮತಗಳನ್ನು ಪಡೆದುಕೊಂಡರು. ಉತ್ತಮ ಪ್ರಜಾಕೀಯ ಪಕ್ಷದ ಅರುಣ್ ದೀಪಕ್ ಮೆಂಡೋನ್ಸಾ 1254 ಮತಗಳನ್ನು ಪಡೆದರೆ ಪಕ್ಷೇತರ ಅಭ್ಯರ್ಥಿ ಚಂದ್ರಶೇಖರ್ ಜಿ. ಅವರು 725 ಮತಗಳನ್ನು ಪಡೆದುಕೊಂಡರು. ನೋಟಾ ಅವಕಾಶವನ್ನು 1132ರಷ್ಟು ಮತದಾರರು ಬಳಸಿಕೊಂಡಿದ್ದಾರೆ.

ಇದೆಲ್ಲದರ ನಡುವೆ ಕುಂದಾಪುರದ ಮಟ್ಟಿಗೆ ಸತ್ತಂತಾಗಿದ್ದ ಕಾಂಗ್ರೆಸ್ ಇದೀಗ ದಿನೆಶ ಹೆಗ್ಡೆ ಮೊಳಹಳ್ಳಿವರ ಸ್ಪರ್ಧೆಯ ಮೂಲಕ ಮತ್ತೆ ಮರುಹುಟ್ಟು ಪಡೆದಿರುವುದಂತೂ ಸುಳ್ಳಲ್ಲ.

Click Here

LEAVE A REPLY

Please enter your comment!
Please enter your name here