ಕುಂದಾಪುರ ಮಿರರ್ ಸುದ್ದಿ…

ಬೈಂದೂರು :ಯಡಿಯೂರಪ್ಪ ರಾಜ್ಯದಲ್ಲಿ ಮೈತ್ರಿ ಮುಂದುವರೆಯತ್ತದೆ ಎಂದಿದ್ದಾರೆ ಅದು ಕಾಂಗ್ರೆಸ್ ಜೊತೆ ಇರೋ ಮೈತ್ರಿ ಮುಂದುವರೆಯುತ್ತೋ? ಒಳ ಒಪ್ಪಂದದ ಮೈತ್ರಿಯೋ ಗೊತ್ತಿಲ್ಲ. ಮೈತ್ರಿ ಒಪ್ಪಂದ ಒಳಮರ್ಮ ಹೆಚ್ಡಿಕೆಗೆ ಬೇಗ ಅರ್ಥವಾಗಲಿ ಎಂದು ಕೆಎಸ್ ಈಶ್ವರಪ್ಪ ಹೇಳಿದ್ದಾರೆ.
ಅವರು ಉಪ್ಪುಂದದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಡೋಂಗಿ ಜಾತ್ಯಾತೀತ ವ್ಯವಸ್ಥೆಯ ಪ್ರದರ್ಶನ ಇವತ್ತು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ನಿಂದ ಆಗುತ್ತಿದೆ. ಇವರು ಒಂದು ಸಮುದಾಯವನ್ನು ಸಂತ್ರಪ್ತ ಪಡಿಸಲು ಏನೆಲ್ಲ ಕಸರತ್ತು ಮಾಡುತ್ತಿದ್ದಾರೆ. ಗೀತಾ ಶಿವರಾಜ್ ಕುಮಾರ್ ಡಮ್ಮಿ ಅಭ್ಯರ್ಥಿ. ಅಸಮಾಧಾನಿತ ಕಾಂಗ್ರೆಸ್ ಮತಗಳು ನನಗೆ ಬರಲಿದೆ. ಕಾಂಗ್ರೆಸ್ ಬಿಜೆಪಿಯವರು ಹಿಂಬಾಗಿಲಿನಿಂದ ಬೆಂಬಲ ಕೊಡುವುದಾಗಿ ಹೇಳಿದ್ದಾರೆ. ಹಿಂದೂ, ಹಿಂದುತ್ವ ವಿರೋಧ ಮಾಡಿಕೊಂಡರೆ ಉಳಿಗಾಲವಿಲ್ಲ ಎಂದು ನಂಬಿದವ ನಾನು. ಹಾಗಾಗಿ ಈ ಚುನಾವಣೆಯಲ್ಲಿ ಗೆಲುವು ಸಾಧಿಸುತ್ತೇನೆ ಎಂದರು.
ನನಗೆ ಯಡಿಯೂರಪ್ಪ ಟಿಕೆಟ್ ಕೊಡಿಸಿ ಗೆಲ್ಲಿಸೋದಾಗಿ ಭರವಸೆ ಕೊಟ್ಟಿದ್ದರು. ಆದರೆ ಕೊನೆಯ ಕ್ಷಣದಲ್ಲಿ ನಂಬಿಸಿ ಮೋಸ ಮಾಡಿದರು. ಡಿವಿಎಸ್, ಪ್ರತಾಪ್ ಸಿಂಹ, ಸಿಟಿ ರವಿ, ಅನಂತ್ ಕುಮಾರ್ ಹೆಗಡೆ ಅವರಿಗೂ ಕೂಡಾ ನನ್ನಂತೆ ದ್ರೋಹವಾಯಿತು. ಇದಕ್ಕೆಲ್ಲಾ ಕಾರಣರಾದವರ ಯೋಗ್ಯತೆ ಒಂದು ತಿಂಗಳಲ್ಲಿ ಗೊತ್ತಾಗಿದೆ ಎಂದರು.
ಚುನಾವಣೆಗೆ ಸಾಧು ಸಂತರನ್ನು ಮಧ್ಯಕ್ಕೆ ತರೋದು ನೋವಿನ ಸಂಗತಿ. ಇದನ್ನು ರಾಷ್ಟ್ರ ಭಕ್ತಬಳಗ ಖಂಡಿಸುತ್ತದೆ. ಲೋಕಸಭಾ ಕ್ಷೇತ್ರದಲ್ಲಿ ನನಗೆ ಪೂರ್ಣ ಜನಬೆಂಬಲ ಸಿಕ್ಕಿದೆ.ನನ್ನ ಕೂಗು ಕೇಂದ್ರವನ್ನು ತಲುಪಿದೆ. ಇವತ್ತು ಕೂಡ ಫೆÇೀನ್ ಬಂದಿದೆ. ಅಮಿತ್ ಶಾಗೆ ಅವರಿಗೂ ನನ್ನ ಮಾತು ತಲುಪಿದೆ ಎಂದ ಅವರು, ನಾನು ರಾಜ್ಯದಲ್ಲಿ ಕೆಲಸ ಮಾಡಿಲ್ಲ ಅನ್ನಲಿ, ಆಗ ನಾನು ಉತ್ತರ ಕೊಡುತ್ತೇನೆ. ತಪಸ್ಸಿಂದ ಕಟ್ಟಿದ ಪಕ್ಷ ಇವತ್ತು ಅಧೋಗತಿಗೆ ಹೋಗುತ್ತಿದೆ. ಬಿಜೆಪಿ ಪ್ರೈವೆಟ್ ಲಿಮಿಟೆಡ್ ಪಾರ್ಟ್ನರ್ ಶಿಪ್ ಕಂಪನಿ ಅಲ್ಲ. ನನಗೆ ಆರ್ ಎಸ್ ಎಸ್, ಸಂಘ ಪರಿವಾರ ಶಿವಮೊಗ್ಗದಲ್ಲಿ ಬೆಂಬಲಿಸಿದೆ. ಕರ್ನಾಟಕದ ಮೂಲೆ ಮೂಲೆಯಿಂದ ಜನ ನನ್ನನ್ನು ಬೆಂಬಲಿಸುತ್ತಿದ್ದಾರೆ ಎಂದರು.
ಎರಡು ಮೂರು ದಿನದಲ್ಲಿ ನನ್ನ ಚಿಹ್ನೆ ಅಂತಿಮವಾಗುತ್ತದೆ. ಚಿಹ್ನೆ ವಿಚಾರದಲ್ಲಿ ನನಗೆ ತಕರಾರು ಇದೆ. ಚುನಾವಣೆಯಲ್ಲಿ ಸಿಂಹ ಹುಲಿ ತರದ ಚಿಹ್ನೆ ಬೇಕು. ಹುರುಪು ಬರುವಂತಹ ಚಿಹ್ನೆ ಬೇಕು ಅಂತ ಬೇಡಿಕೆಯಿಟ್ಟು ಪತ್ರ ಬರೆಯುತ್ತೇನೆ. ಈಗ ಕೊಟ್ಟಿರೋ ಪಟ್ಟಿಯಲ್ಲಿ ಯಾವುದು ಒಳ್ಳೆ ಚಿಹ್ನೆಗಳಿಲ್ಲ. ಹಾಗಾಗಿ ಚುನಾವಣೆ ಆಯೋಗಕ್ಕೆ ಪತ್ರ ಬರೆಯುತ್ತೇನೆ ಎಂದರು.











