Category: ಸುದ್ದಿ

  • ವಡ್ಡರ್ಸೆ- ಆರನೇ ವರ್ಷದ ಚಿಣ್ಣರ ಯಕ್ಷಗಾನ ತರಬೇತಿ ಆರಂಭ

    ವಡ್ಡರ್ಸೆ- ಆರನೇ ವರ್ಷದ ಚಿಣ್ಣರ ಯಕ್ಷಗಾನ ತರಬೇತಿ ಆರಂಭ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಅಧ್ಯಯನದ ಜೊತೆಗೆ ಯಕ್ಷಗಾನ ಕಲೆಯನ್ನು ಕಲಿತಾಗ ಮಕ್ಕಳಲ್ಲಿ ಆತ್ಮಸ್ಥೈರ್ಯ ಜಾಗೃತಿಯಾಗಿ,ಮಕ್ಳಳು ಯಾವುದೇ ಕ್ಷೇತ್ರದಲ್ಲೂ ತಮ್ಮದೇ ಆದ ಛಾಪನ್ನು ಮೂಡಿಸಬಲ್ಲರೆಂದು ಯಕ್ಷ ಗುರುಗಳಾದ ದೇವದಾಸರಾವ್ ಕೂಡ್ಲಿ ಹೇಳಿದರು.

    ಅವರು ಭಾನುವಾರದಂದು ಶ್ರೀ ಮಹಾಲಿಂಗೇಶ್ವರ ಕಲಾರಂಗ ವಡ್ಡರ್ಸೆ ಇದರ ಆರನೇ ವರ್ಷದ ಮಕ್ಕಳ ಯಕ್ಷಗಾನ,ತಾಳ ಹೆಜ್ಜೆ ,ತರಗತಿಗೆ ಚಾಲನೆ ನೀಡಿ ಮಾತನಾಡಿದರು.

    ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಕೀಲ ಕೊತ್ತಾಡಿ ಉದಯ್ ಕುಮಾರ್ ಶೆಟ್ಟಿ ಒತ್ತಡವನ್ನು ನಿವಾರಣೆ ಮಾಡುವ ಯಕ್ಷಗಾನ ಕಲೆಯನ್ನು ಎಲ್ಲಾ ಮಕ್ಕಳು ಕಲಿತು ಬದುಕಿನಲ್ಲಿ ಅಳವಡಿಸಿಕೊಂಡು ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಬಾಳಿ ಎಂದು ಶುಭ ಹಾರೈಸಿ ಕಲಾರಂಗದ ಯಕ್ಷ ಸೇವೆಯನ್ನು ಶ್ಲಾಘಿಸಿದರು. ಕಲಾರಂಗದ ಅಧ್ಯಕ್ಷ ಸಚಿನ್ ಶೆಟ್ಟಿ ಯಾಳಕ್ಲು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಕಾರ್ಯದರ್ಶಿ ಪಿಡಿಓ ಸತೀಶ್ ವಡ್ಡರ್ಸೆ ಸ್ವಾಗತಿಸಿ, ನಿರೂಪಣೆಗೈದರು. ಕಲಾರಂಗದ ಸರ್ವ ಸದಸ್ಯರು, ಮಕ್ಕಳ ಪೆÇೀಷಕರು ಉಪಸ್ಥಿತರಿದ್ದರು.

  • ಪಂಚವರ್ಣ ಸಂಸ್ಥೆಯ ಸಮಾಜಮುಖಿ ಕಾರ್ಯಗಳೆ ಅದರ ಸಾಧನೆ ತೋರ್ಪಡಿಸುತ್ತದೆ – ಸತೀಶ್ ಕುಂದರ್

    ಪಂಚವರ್ಣ ಸಂಸ್ಥೆಯ ಸಮಾಜಮುಖಿ ಕಾರ್ಯಗಳೆ ಅದರ ಸಾಧನೆ ತೋರ್ಪಡಿಸುತ್ತದೆ – ಸತೀಶ್ ಕುಂದರ್

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಪಂಚವರ್ಣ ಸಂಸ್ಥೆಯ ಸಮಾಜಮುಖಿ ಕಾರ್ಯಗಳೆ ಅದರ ಸಾಧನೆಯ ಮಜಲುಗಳನ್ನು ತೋರ್ಪಡಿಸುತ್ತದೆ ಎಂದು ಎಂದು ಕೋಟತಟ್ಟು ಗ್ರಾಮಪಂಚಾಯತ್ ಅಧ್ಯಕ್ಷ ಸತೀಶ್ ಕುಂದರ್ ಹೇಳಿದರು.

    ಕೋಟದ ಪಂಚವರ್ಣ ಯುವಕ ಮಂಡಲ ಅಧೀನಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ನೇತ್ರತ್ವದಲ್ಲಿ ಮಣೂರು ಫ್ರೆಂಡ್ಸ್, ಹಂದಟ್ಟು ಮಹಿಳಾ ಬಳಗ ,ವಿಪ್ರ ಮಹಿಳಾ ಬಳಗ ಸಾಲಿಗ್ರಾಮ, ಗೆಳೆಯರ ಬಳಗ ಕಾರ್ಕಡ,ಗೀತಾನಂದ ಫೌಂಡೇಶನ್ ಮಣೂರು ಇವರುಗಳ ಸಹಯೋಗದೊಂದಿಗೆ ಪರಿಸರಸ್ನೇಹಿ ಅಭಿಯಾನಕ್ಕೆ 176ನೇ ವಾರದ ಸಂಭ್ರಮ ಆ ಪ್ರಯುಕ್ತ ಹಾಲು ಉತ್ಪಾದಕರ ಸಹಕಾರ ಸಂಘ ಕೋಟತಟ್ಟು ಪಡುಕರೆ ಸಂಯೋಜನೆಯೊಂದಿಗೆ ವನಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ ಒಂದು ಸಂಸ್ಥೆ ಹೇಗಿರಬೇಕು ಎಂಬುವುದನ್ನು ಪಂಚವರ್ಣ ಸಂಸ್ಥೆ ತೋರಿಸಿಕೊಟ್ಟಿದೆ.ತನ್ನ ಇತಿಮಿತಿಯೊಳಗೆ ಸಾಮಾಜಿಕ ಬದ್ಧತೆ ಪ್ರದರ್ಶಿಸುವ ಅದರ ಕಾರ್ಯಗಳು ಜನಮನ ಗೆದ್ದಿದೆ ಎಂದರಲ್ಲ ಪರಿಸರದ ಬಗ್ಗೆ ಪ್ರತಿಯೊಬ್ಬರಿಗೂ ಜಾಗೃತಿ ಅತ್ಯವಶ್ಯಕ ಈ ನಿಟ್ಟಿನಲ್ಲಿ ಪ್ರತಿಯೊಂದುಮನೆಯಲ್ಲೂ ಗಿಡನೆಟ್ಟು ಪೋಷಿಸುವ ಕೆಲಸ ಆಗಲಿ ಎಂದು ಹಾರೈಸಿದರು.

    ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಹಾಲು ಉತ್ಪಾದಕರಿಗೆ ಗಿಡಗಳನ್ನು ವಿತರಿಸಲಾಯಿತು.

    ಹಾಲು ಉತ್ಪಾದಕರ ಸಹಕಾರ ಸಂಘ ಕೋಟತಟ್ಟು ಪಡುಕರೆ ಅಧ್ಯಕ್ಷ ಶಿವಮೂತಿ ಕೆ ಅಧ್ಯಕ್ಷತೆ ವಹಿಸಿದ್ದರು.

    ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್, ಮಹಿಳಾ ಮಂಡಲದ ಉಪಾಧ್ಯಕ್ಷೆ ವಸಂತಿ ಹಂದಟ್ಟು, ಕಾರ್ಯದರ್ಶಿ ಲಲಿತ ಪೂಜಾರಿ,ಹಾಲು ಉತ್ಪಾದಕರ ಸಹಕಾರ ಸಂಘದ ಉಪಾಧ್ಯಕ್ಷ ಭಾಸ್ಕರ್ ಶೆಟ್ಟಿ, ಕಾರ್ಯದರ್ಶಿ ವೀಣಾ ಉಪಾಧ್ಯ,ಕೋಟ ಗ್ರಾಮಪಂಚಾಯತ್ ಮಾಜಿ ಸದಸ್ಯ ವಿಜಯ ಕುಂದರ್, ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರನವನ್ನು ಪಂಚವರ್ಣದ ಕಾರ್ಯಾಧ್ಯಕ್ಷ ರವೀಂದ್ರ ಕೋಟ ನಿರೂಪಿಸಿ ವಂದಿಸಿದರು.

  • ಕೋಟ :ರೈತರ ಮನೆಗೆ ತೆರಳಿ ಗೌರವಿಸುವ ಕಾರ್ಯ ಪಂಚವರ್ಣದ ಕಾರ್ಯ ನಿಜಕ್ಕೂ ಅಭಿನಂದನೀಯ – ಟಿ.ಗಣಪತಿ ಶ್ರೀಯಾನ್

    ಕೋಟ :ರೈತರ ಮನೆಗೆ ತೆರಳಿ ಗೌರವಿಸುವ ಕಾರ್ಯ ಪಂಚವರ್ಣದ ಕಾರ್ಯ ನಿಜಕ್ಕೂ ಅಭಿನಂದನೀಯ – ಟಿ.ಗಣಪತಿ ಶ್ರೀಯಾನ್

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಸಾಧಕ ರೈತರನ್ನು ಹುಡುಕಿ ಅವರ ಮನಗೆ ತೆರಳಿ ಗೌರವಿಸುವ ಪಂಚವರ್ಣ ಸಂಸ್ಥೆ ಕಾರ್ಯ ನಿಜಕ್ಕೂ ಅಭಿನಂದನೀಯ ಎಂದು ಮಾಜಿ ಜಿ.ಪಂ ಸದಸ್ಯ ಟಿ.ಗಣಪತಿ ಶ್ರೀಯಾನ್ ಹೇಳಿದರು.

    ಭಾನುವಾರ ಪಂಚವರ್ಣ ಯುವಕ ಮಂಡಲ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ನೇತ್ರತ್ವದಲ್ಲಿ ರೈತಧ್ವನಿ ಸಂಘ ಕೋಟ, ವಿಪ್ರ ಮಹಿಳಾ ಬಳಗ ಸಾಲಿಗ್ರಾಮ, ಗೆಳೆಯರ ಬಳಗ ಕಾರ್ಕಡ, ರೋಟರಿ ಕ್ಲಬ್ ಕೋಟ ಸಾಲಿಗ್ರಾಮ ಇವರುಗಳ ಸಹಯೋಗದೊಂದಿಗೆ ತೆಕ್ಕಟ್ಟೆ ಪರಿಸರದ ಸಾಧಕ ರೈತ ಶೇಷು ದೇವಾಡಿಗ ಇವರನ್ನು ಗೌರವಿಸುವ ರೈತರೆಡೆಗೆ ನಮ್ಮನಡಿಗೆ ಕಾರ್ಯಕ್ರಮದಲ್ಲಿ ಮಾತನಾಡಿ ಪ್ರಸ್ತುತ ವಿದ್ಯಾಮಾನಗಳನ್ನು ಗಮನಿಸಿದರೆ ಯುವ ಜನಾಂಗ ಕೃಷಿ ಕಾಯಕದಿಂದ ಹಿಮ್ಮುಖ ಕಾಣುತ್ತಿದೆ ಈ ರೀತಿಯ ಪ್ರಸಂಗ ಎದುರಾದರೆ ದೇಶಕ್ಕೆ ಆಪತ್ತು ತಪ್ಪಿದಲ್ಲ ಶೇಷು ದೇವಾಡಿಗರಂತೆ ಪ್ರತಿಯೊಂದು ಭಾಗದಲ್ಲಿ ಯುವ ಸಮೂಹ ಕೃಷಿ ಕಾಯಕದಲ್ಲಿ ತೋಡಗಿಕೊಳ್ಳುವಂತರಾಗಬೇಕು. ಆ ಮೂಲಕ ಕೃಷಿ ಅವಲಂಬಿತ ದೇಶ ಎಂಬಹಣೆಪಟ್ಟಿ ನಿತ್ಯನಿರಂತರವಾಗಬೇಕು ದೇಶದ ರೈತರಿಗೆ ಪ್ರೋತ್ಸಾಹ ನೀಡುವ ಯೋಜನೆಗಳನ್ನು ಸರಕಾರ ರೂಪಿಸಬೇಕು. ಆ ಮೂಲಕ ಕೃಷ ಕಾರ್ಯಕ್ಕೆ ಉತ್ತೇಜಿಸು ಕಾರ್ಯಗಳು ನಡೆಯಲಿ, ರೈತರ ಮನೆಯಂಗಳಕ್ಕೆ ತೆರಳಿ ಅವರನ್ನು ಗುರುತಿಸುವ ಕಾರ್ಯಕ್ರಮ ನಿಜಕ್ಕೂ ಶ್ಲಾಘನೀಯ, ಪಂಚವರ್ಣ ಸಂಸ್ಥೆ ನಾನಾ ರೀತಿಯ ಸಮಾಜಮುಖಿ ಕಾರ್ಯಕ್ರಮಗಳನ್ನು ನೀಡಿ ಇತರ ಸಂಸ್ಥೆಗಳಿಗೆ ಮಾದರಿಯಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

    ಈ ಸಂದರ್ಭದಲ್ಲಿ ಸಾಧಕ ರೈತ ತೆಕ್ಕಟ್ಟೆ ಶೇಷು ದೇವಾಡಿಗ ದಂಪತಿಗಳನ್ನು ಕೃಷಿ ಪರಿಕರಗಳನ್ನಿತ್ತು ಗೌರವಿಸಲಾಯಿತು

    ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್ ಅಧ್ಯಕ್ಷತೆ ವಹಿಸಿದ್ದರು.

    ತೆಕ್ಕಟ್ಟೆ ಗ್ರಾಮಪಂಚಾಯತ್ ಅಧ್ಯಕ್ಷೆ ಶೋಭಾನಾ ,ಮಾಜಿ ಉಪಾಧ್ಯಕ್ಷ ಸಂಜೀವ ದೇವಾಡಿಗ ,ತೆಕ್ಕಟ್ಟೆ ಗ್ರಾ.ಪಂ ಎಸ್ ಎಲ್ ಆರ್ ಎಂ ಘಟಕದ ಮುಖ್ಯಸ್ಥೆ ರೇವತಿ ,ರೈತಧ್ವನಿ ಸಂಘ ಕೋಟ ಅಧ್ಯಕ್ಷ ಎಂ.ಜಯರಾಮ ಶೆಟ್ಟಿ,ರೋಟರಿ ಕ್ಲಬ್ ತೆಕ್ಕಟ್ಟೆ ಮಾಜಿ ಅಧ್ಯಕ್ಷ ಹೆರಿಯ ಮಾಸ್ಟರ್,ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಕಲಾವತಿ ಅಶೋಕ್ ,ಮತ್ತಿತರರು ಉಪಸ್ಥಿತರಿದ್ದರು. ಇದೆ ವೇಳೆ ಪರಿಸರ ಜಾಗೃತಿ ಸೃಷ್ಟಿಸುವ ಉದ್ದೇಶದಿಂದ ಶೇಷು ದೇವಾಡಿಗರ ಮನೆವಠಾರದಲ್ಲಿಗಿಡ ನೆಡಲಾಯಿತು.

    ಪಂಚವರ್ಣ ಮಹಿಳಾ ಮಂಡಲದ ಶಕೀಲ ನಾಗರಾಜ್ ಸ್ವಾಗತಿಸಿದರು. ಕಾರ್ಯಕ್ರಮವನ್ನು ಪಂಚವರ್ಣ ಮಹಿಳಾ ಮಂಡಲದ ಸುಜಾತ ಬಾಯರಿ ನಿರೂಪಿಸಿದರು. ಕಾರ್ಯಾಧ್ಯಕ್ಷ ರವೀಂದ್ರ ಕೋಟ ವಂದಿಸಿದರು.

  • ಸಾಲಿಗ್ರಾಮ: ಮಗಳನ್ನು ಕೊಂದು ತಿಂದ ಅತ್ಯಾಚಾರಿಗಳಿಗೆ ಶಿಕ್ಷೆಯಾಗುವ ವರೆಗೆ ಹೋರಾಡುವೆ – ಕಣ್ಣೀರ್ಗರೆದ ಸೌಜನ್ಯಾ ತಾಯಿ

    ಸಾಲಿಗ್ರಾಮ: ಮಗಳನ್ನು ಕೊಂದು ತಿಂದ ಅತ್ಯಾಚಾರಿಗಳಿಗೆ ಶಿಕ್ಷೆಯಾಗುವ ವರೆಗೆ ಹೋರಾಡುವೆ – ಕಣ್ಣೀರ್ಗರೆದ ಸೌಜನ್ಯಾ ತಾಯಿ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ಕಳೆದ ಹನ್ನೊಂದು ವರ್ಷಗಳಿಂದ ನನ್ನ ಮಗಳ ಅತ್ಯಾಚಾರ ಮತ್ತು ಕೊಲೆಯ ಆರೋಪಿಗಳನ್ನು ಪತ್ತೆಹಚ್ಚಿ ಶಿಕ್ಷಿಸುವಂತೆ ಹೋರಾಡುತ್ತಾ ಬಂದಿದ್ದೇನೆ. ನ್ಯಾಯ ಸಿಗುವವರೆಗುಇ ಹೋರಾಡುತ್ತೇನೆ. ನನ್ನ ಹೋರಾಟಕ್ಕೆ ನಿಮ್ಮ ಬೆಂಬಲಬೇಕು ಎಂದು ಸೌಜನ್ಯಾ ತಾಯಿ ಕುಸುಮಾವತಿ ಹೇಳಿದ್ದಾರೆ.

    ಅವರು ಶನಿವಾರ ಸಾಲಿಗ್ರಾಮದಲ್ಲಿ ಕೋಟ, ಸಾಲಿಗ್ರಾಮ, ಸಾಸ್ತಾನ ಸೌಜನ್ಯ ಹೋರಾಟ ಸಮಿತಿ ಹಮ್ಮಿಕೊಂಡ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

    ನನ್ನ ಮಗಳನ್ನು ಅತ್ಯಾಚಾರಗೈದು ಕೊಲೆ ಮಾಡಿದ ವ್ಯಕ್ತಿಗಳನ್ನು ಪತ್ತೆಹಚ್ಚಿ ಗಲ್ಲಿಗೇರಿಸಬೇಕು. ಎಲ್ಲೆಡೆ ಹೋರಾಟದ ಕಿಚ್ಚು ನನ್ನ ಮಗಳಿಗಾದ ಅನ್ಯಾಯದ ವಿರುದ್ದ ಧ್ವನಿ ಕೇಳುತ್ತಿದೆ. ಮುಖ್ಯಮಂತ್ರಿಗಳು ನ್ಯಾಯ ದೊರಕಿಸಿಕೊಡುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಗೃಹಸಚಿವರು ಅವರ ಪರವಾಗಿ ಹೇಳಿಕೆ ನೀಡಿದಂತಿದೆ. ಯಾರೇನೇ ಮಾಡಿದರೂ ನಮ್ಮ ಹೋರಾಟ ಮುಂದುವರೆಯಲಿದೆ ಎಂದರು.

    ಧರ್ಮದ ತಳಹದಿ ಇರುವ ಕ್ಷೇತ್ರದಲ್ಲಿ ಸೌಜನ್ಯನಿಗೆ ನ್ಯಾಯ ಸಿಕ್ಕೇ ಸಿಗುತ್ತದೆ ಇದಕ್ಕೆ ಅಲ್ಲಿರುವ ದೇವರುಗಳೇ ಸಾಕ್ಷಿ ಎಂದು ವಕೀಲೆ ಅಂಬಿಕಾ ಪ್ರಭು ಹೇಳಿದರು.

    ಹಿಂದೂ ಸಮಾಜ ಅನ್ಯಾಯದ ವಿರುದ್ಧ ಸದಾ ಧ್ಬನಿ ಎತ್ತಿ ನ್ಯಾಯ ದೊರಕಿಸಿದ ಇತಿಹಾಸಗಳಿವೆ. ಅದೇ ರೀತಿ ಸೌಜನ್ಯ ಕುಟುಂಬಕ್ಕೂ ನ್ಯಾಯ ದೇವತೆ ಕಣ್ತೆರೆಯುತ್ತಾಳೆ. ಈ ಪ್ರಕರಣವನ್ನು ಹಳ್ಳ ಹಿಡಿಸುವ ಪ್ರಯತ್ನ ಯಶಸ್ಸು ಕಾಣದು ಎಂದು ಪ್ರಕರಣದ ದಿಕ್ಕು ತಪ್ಪಿಸಲು ಯತ್ನಿಸುತ್ತಿರುವ ವ್ಯಕ್ತಿಗಳನ್ನು ಎಚ್ಚರಿಸಿದರು.

    ಕ್ರೂರವಾಗಿ ಮಗಳನ್ನು ಕಳೆದುಕೊಂಡ ತಾಯಿಯ ಹೋರಾಟವನ್ನು ಹಿಮ್ಮೆಟ್ಟಿಸಲು ಕೆಲವರು ಎಟಿಎಂ ಪದ ಬಳಸುತ್ತಿದ್ದಾರೆ. ದೊಡ್ಡವರಿಗೆ ಬಕೆಟ್ ಹಿಡಿಯುವ ಭರದಲ್ಲಿ ಸಂತ್ರಸ್ಥ ಕುಟುಂಬಕ್ಕೆ ಮಸಿ ಬಳಿಯುತ್ತಾರೆ. ಇದಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ ಎಂದು ರಾಷ್ಟ್ರೀಯ ಮಾನವಹಕ್ಕುಗಳ ರಾಜ್ಯ ಸಮಿತಿ ಪ್ರದಾನ ಕಾರ್ಯದರ್ಶಿ ಡಾ. ದಿನೇಶ್ ಗಾಣಿಗ ಹೇಳಿದ್ದಾರೆ.

    ಈ ಸಂದರ್ಭದಲ್ಲಿ ಸೌಜನ್ಯ ಭಾವಚಿತ್ರಕ್ಕೆ ಪ್ರತಿಭಟನಾಕಾರರು ಪುಷ್ಭಾರ್ಚನೆಗೈದರು. ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ, ಆಂಜನೇಯ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಮೆರವಣಿಗೆ ಮೂಲಕ ಪ್ರತಿಭಟನಾ ಸಭೆಗೆ ಆಗಮಿಸಿತು.

    ನಾಗರಾಜ ಗಾಣಿಗ ಪ್ರಾಸ್ತಾವಿಸಿದರು.
    ಕುಂದಾಪುರ ಸೌಜನ್ಯ ಹೋರಾಟ ಸಮಿತಿ ಪ್ರಮುಖ ಸುಧೀರ್ ಶೆಟ್ಟಿ ಮಲ್ಯಾಡಿ, ಸೌಜನ್ಯ ಸೋದರ ಮಾವ ವಿಠ್ಠಲ ಗೌಡ ಮತ್ತಿತರರು ಉಪಸ್ಥಿತರಿದ್ದರು. ಪ್ರಸಾದ್ ಬಿಲ್ಲವ ನಿರೂಪಿಸಿದರು.

  • ಹಡಿಲು ಭೂಮಿಯಲ್ಲಿ ಭತ್ತದ ಬೆಳೆ : ಅಂಪಾರಿನಲ್ಲಿ ಬೆಳೆ ಸಂರಕ್ಷಣಾ ತರಬೇತಿ

    ಹಡಿಲು ಭೂಮಿಯಲ್ಲಿ ಭತ್ತದ ಬೆಳೆ : ಅಂಪಾರಿನಲ್ಲಿ ಬೆಳೆ ಸಂರಕ್ಷಣಾ ತರಬೇತಿ

    Video:

    ಕುಂದಾಪುರ ಮಿರರ್ ‌ಸುದ್ದಿ..


    ಕುಂದಾಪುರ : ಕುಂದನಾಡು ರೈತ ಉತ್ಪಾದಕ ಕಂಪೆನಿ ವಂಡ್ಸೆ ಹೋಬಳಿ, ಅಂಪಾರು ಸಹಕಾರಿ ವ್ಯವಸಾಯಿಕ ಸಂಘ, ಅಂಪಾರು ಗ್ರಾ.ಪಂ., ರೋಟರಿ ಕ್ಲಬ್ ಅಂಪಾರು, ವನಶ್ರೀ ಸಂಜೀವಿನಿ ಒಕ್ಕೂಟದ ಆಶ್ರಯದಲ್ಲಿ ಹಡಾಳಿಯಲ್ಲಿ ನಡೆದಿದ್ದ ಹಡಿಲು ಭೂಮಿ ಭತ್ತದ ಕೃಷಿ ಗದ್ದೆಯಲ್ಲಿ ಶನಿವಾರ ಬೆಳೆ ಸಂರಕ್ಷಣಾ ಕಾರ್‍ಯಕ್ರಮ ನಡೆಯಿತು.

    ಜುಲೈನಲ್ಲಿ ಹಡಾಳಿಯಲ್ಲಿ ೧೨ ಎಕರೆ ಹಡಿಲು ಭೂಮಿ ನಾಟಿ ಮಾಡಲಾಗಿತ್ತು. ಆ ನಾಟಿ ಮಾಡಿರುವ ಗದ್ದೆಗಳಲ್ಲಿ ಕಳೆ ತೆಗೆಯುವ ಮೂಲಕ ಬೆಳೆ ಸಂರಕ್ಷಣಾ ಕಾರ್‍ಯ ವಿವಿಧ ಸಂಘಟನೆಗಳ ಸಹಯೋಗದಲ್ಲಿ ನಡೆಯಿತು.

    ಕುಂದನಾಡು ರೈತ ಉತ್ಪಾದಕ ಸಂಸ್ಥೆಯ ಅಧ್ಯಕ್ಷ ಬಲಾಡಿ ಸಂತೋಷ್ ಕುಮಾರ್ ಶೆಟ್ಟಿ ಮಾತನಾಡಿ, ಹಡಿಲು ಭೂಮಿ ಕೃಷಿಗೆ ಪೂರಕವಾಗಿ ಈ ಕಾರ್‍ಯಕ್ರಮ ಹಮ್ಮಿಕೊಂಡಿದ್ದೇವೆ. ಈ ಹಡಿಲು ಭೂಮಿ ಕೃಷಿಯಿಂದ ಉತ್ತೇಜನಗೊಂಡು, ಈ ಭಾಗದ ಇನ್ನಷ್ಟು ರೈತರು ತಮ್ಮ ಭೂಮಿಯನ್ನು ಕೃಷಿ ಮಾಡುವಂತೆ ಕೋರಿಕೊಂಡಿದ್ದಾರೆ. ಕಂಪೆನಿ ವತಿಯಿಂದ ಸಣ್ಣ ಹಾಗೂ ಅತೀ ಸಣ್ಣ ರೈತರಿಗೆ ನೆರವಾಗಲಿದೆ ಎಂದರು.

    ಈ ಸಂದರ್ಭದಲ್ಲಿ ಕುಂದನಾಡು ರೈತ ಉತ್ಪಾದಕ ಸಂಸ್ಥೆ ನಿರ್ದೇಶಕರಾದ ಮಲ್ಲಿಕಾ ಶೆಟ್ಟಿ, ಜ್ಯೋತಿ ಶೆಟ್ಟಿ, ಕಾರ್‍ಯನಿರ್ವಹಣಾಧಿಕಾರಿ ಅಜಿತ್ ಆಚಾರ್ಯ, ಅಂಪಾರು ಸಹಕಾರಿ ವ್ಯವಸಾಯಿಕ ಸಂಘದ ಉಪಾಧ್ಯಕ್ಷ ಅಶೋಕ್, ನಿರ್ದೇಶಕ ಚಂದ್ರಶೇಖರ ಉಡುಪ, ಸಂಜೀವಿನಿ ಒಕ್ಕೂಟದ ಅವಿನಾಶ್, ಯತೀಶ್,ವನಶ್ರೀ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ರೋಶನಿ ಶೆಟ್ಟಿ, ಗ್ರಾ.ಪಂ. ಸದಸ್ಯರಾದ ಗಣೇಶ್ ಮೊಗವೀರ, ನಂದಿನಿ, ಕಾವ್ರಾಡಿ ಗ್ರಾ.ಪಂ. ಮಾಜಿ ಸದಸ್ಯ ಕಾಳಿಂಗ ಶೆಟ್ಟಿ, ಸಿದ್ದಾಪುರ ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ, ಅಂಪಾರು ಯುವ ಮಂಡಲದ ಅಧ್ಯಕ್ಷ ಉಮೇಶ್ ಕೋಟ್ಯಾನ್, ಕೃಷಿ ಸಖಿ ಭಾರತಿ ಶೆಟ್ಟಿ, ಪಶು ಸಖಿ ರೂಪಾ, ಎಂಬಿಕೆ ಸಂಜೀವಿನಿ ಒಕ್ಕೊಟದ, ಎಂಸಿಆರ್‌ಪಿ, ಸದಸ್ಯರು, ಮತ್ತಿತರರು ಉಪಸ್ಥಿತರಿದ್ದರು

  • ಬೀಜಾಡಿ ಗ್ರಾ.ಪಂ. ಅಧ್ಯಕ್ಷರಾಗಿ‌ ಪ್ರಕಾಶ್ ಪೂಜಾರಿ‌, ಉಪಾಧ್ಯಕ್ಷರಾಗಿ ರಜನಿ ಜ್ಯೂಲಿ ಆಯ್ಕೆ

    ಬೀಜಾಡಿ ಗ್ರಾ.ಪಂ. ಅಧ್ಯಕ್ಷರಾಗಿ‌ ಪ್ರಕಾಶ್ ಪೂಜಾರಿ‌, ಉಪಾಧ್ಯಕ್ಷರಾಗಿ ರಜನಿ ಜ್ಯೂಲಿ ಆಯ್ಕೆ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ :ಬೀಜಾಡಿ ಗ್ರಾಮ ಪಂಚಾಯತ್‍ನ 2ನೇ ಅವಧಿಗೆ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಪ್ರಕಾಶ್ ಪೂಜಾರಿ ಮತ್ತು ಉಪಾಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ರಜಿನಿ ಜ್ಯೂಲಿ ಇವರು ಅವಿರೋಧವಾಗಿ ಆಯ್ಕೆಯಾದರು.

    ಈ ಗ್ರಾಮ ಪಂಚಾಯತ್‍ನಲ್ಲಿ ಒಟ್ಟು 16 ಸ್ಥಾನಗಳಿದ್ದು ಈ ಪೈಕಿ ಬಿಜೆಪಿ ಬೆಂಬಲಿತ 10 ಅಭ್ಯರ್ಥಿಗಳು ಹಾಗೂ ಕಾಂಗ್ರೆಸ್ ಬೆಂಬಲಿತ 06 ಅಭ್ಯರ್ಥಿಗಳು ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು.

    ಈ ಬಾರಿಯ 2ನೇ ಅವಧಿಗೆ ಚುನಾವಣೆಯಲ್ಲಿ ಸರಕಾರದ ನಿಯಮಗಳಂತೆ ಅಧ್ಯಕ್ಷ ಪಟ್ಟ ಹಿಂದುಳಿದ ವರ್ಗ ಅ ಪುರುಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗ ಬಿ ಮಹಿಳೆಗೆ ಮೀಸಲಾತಿ ಪ್ರಕಟವಾಗಿದ್ದು ಈ 2 ಹುದ್ದೆಗಳು ಯಾವುದೇ ಗೊಂದಲಗಳಿಲ್ಲದೇ ಅವಿರೋಧವಾಗಿ ಆಯ್ಕೆಯಾಯಿತು.

    ತಾಲೂಕು ಯುವಜನ ಮತ್ತು ಸೇವಾ ಕ್ರೀಡಾಧಿಕಾರಿ ಕುಸುಮಾಕರ್ ಶೆಟ್ಟಿ ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಣೇಶ್ ಚುನಾವಣಾಧಿಕಾರಿಯಾಗಿ ಚುನಾವಣಾ ಕ್ರಮಗಳನ್ನು ನಡೆಸಿಕೊಟ್ಟರು. ಪಂಚಾಯತ್‍ನ ನಿಕಟ ಪೂರ್ವಧ್ಯಕ್ಷೆ ಸುಮತಿ ನಾಗರಾಜ್ ಮತ್ತು ಸರ್ವ ಸದಸ್ಯರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

  • ಐರೋಡಿ  ಶ್ರೀ ಮಹಾಕಾಳಿ,ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಐರೋಡಿ ವಿಠ್ಠಲ್ ಪೂಜಾರಿ ಆಯ್ಕೆ

    ಐರೋಡಿ ಶ್ರೀ ಮಹಾಕಾಳಿ,ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಐರೋಡಿ ವಿಠ್ಠಲ್ ಪೂಜಾರಿ ಆಯ್ಕೆ

    ಕುಂದಾಪುರ ಮಿರರ್ ಸುದ್ದಿ…
    ಕೋಟ: ಐರೋಡಿ ಅಲ್ಸೆಬೆಟ್ಟು ಶ್ರೀ ಮಹಾಕಾಳಿ ಮತ್ತು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಇದರ ನೂತನ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಐರೋಡಿ ವಿಠ್ಠಲ್ ಪೂಜಾರಿ ಆಯ್ಕೆಯಾಗಿದ್ದಾರೆ.

    ಕಾರ್ಯದರ್ಶಿಯಾಗಿ ಶಿವರಾಮ್ ಶ್ರೀಯಾನ್, ಉಪಾಧ್ಯಕ್ಷರಾಗಿ ಶೇಖರ ಮಡಿವಾಳ, ಕಿರಣ್ ಮಡಿವಾಳ, ಶ್ರೀನಿವಾಸ್ ಪೂಜಾರಿ, ಜಗನಾಥ ಬಂಗೇರ, ಬಿ.ಎಸ್ ನಟರಾಜ್ ಗಾಣಿಗ, ಶ್ರೀನಿವಾಸ್ ಕೆ.ಪಿ.ಟಿ.ಸಿ.ಎಲ್, ಜೊತೆಕಾರ್ಯದರ್ಶಿಯಾಗಿ ಉಮೇಶ್ ಕುಂದರ್ ,ಗಣೇಶ್ ಮಡಿವಾಳ ಬಾಳಕುದ್ರು,ಶೇಖರ ಪೂಜಾರಿ,ಸುರೇಶ್ ಮಡಿವಾಳ,ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಆನಂದ ಗಾಣಿಗ,ಗೌರವ ಸಲಹೆಗಾರರಾಗಿ ಶಂಕರ್ ಎ ಕುಂದರ್,ರಮಾನಾಥ ಅಲ್ಸೆ,ನರಸಿಂಹ ಪೂಜಾರಿ, ಸುರೇಶ್ ಕುಂದರ್ ಆಯ್ಕೆಗೊಳಿಸಲಾಗಿದೆ.

  • ಸಂಸದ ಬಿ.ವೈ.ರಾಘವೇಂದ್ರರ ಜನ್ಮದಿನದ ಅಂಗವಾಗಿ ವಂಡ್ಸೆಯಲ್ಲಿ ವಿವಿಧ ಕಾರ್ಯಕ್ರಮ

    ಸಂಸದ ಬಿ.ವೈ.ರಾಘವೇಂದ್ರರ ಜನ್ಮದಿನದ ಅಂಗವಾಗಿ ವಂಡ್ಸೆಯಲ್ಲಿ ವಿವಿಧ ಕಾರ್ಯಕ್ರಮ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ :ಬೈಂದೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ವಂಡ್ಸೆಯ ಬಿ. ವೈ ರಾಘವೇಂದ್ರ ಅಭಿಮಾನಿಗಳ ನೇತೃತ್ವದಲ್ಲಿ ಸಂಸದರಾದ ಬಿ. ವೈ ರಾಘವೇಂದ್ರ ಅವರ ಜನ್ಮದಿನದ ಪ್ರಯುಕ್ತ ವಂಡ್ಸೆಯಲ್ಲಿ ವಿವಿಧ ಕಾರ್ಯಕ್ರಮಗಳ ಆಯೋಜಿಸಲಾಯಿತು.

    ಗೋ ಪೂಜೆ, ದೇವಸ್ಥಾನದಲ್ಲಿ ವಿಶೇಷ ಪೂಜೆ, ಗಿಡ ನೆಡುವುದು, ವಿಶೇಷಚೇತನರಿಗೆ ಹಾಗೂ ಅಶಕ್ತರಿಗೆ ಆಹಾರ ಸಾಮಗ್ರಿ ವಿತರಣೆ, ಆಶಾ ಕಾರ್ಯಕರ್ತೆಯರು, ಹಿರಿಯ ನಾಗರೀಕರಿಗೆ ಸನ್ಮಾನ ಮುಂತಾದ ಕಾರ್ಯಕ್ರಮಗಳನ್ನು ನಡೆಸಲಾಯಿತು.

    ಈ ಸಂದರ್ಭದಲ್ಲಿ ಬಿಜೆಪಿ ಹಿರಿಯ ಕಾರ್ಯಕರ್ತರಾದ ವಿ.ಕೆ ಶಿವರಾಮ ಶೆಟ್ಟಿ, ಜಿಲ್ಲಾ ಪಂಚಾಯಿತ್ ಮಾಜಿ ಸದಸ್ಯೆ ಶೋಭಾ ಜಿ. ಪುತ್ರನ್, ಉಡುಪಿ ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷರಾದ ಅಬ್ದುಲ್ ಮುತಾಲಿ, ನಿರ್ಮಲ ವಂಡ್ಸೆ, ಜಯಂತಿ ಶೆಟ್ಟಿ, ಸುಧಾಕರ ಮಡಿವಾಳ, ಮಹೇಶ್ ಗಾಣಿಗ, ಮಣಿಕಂಠ ಗಾಣಿಗ, ಸುಧೀರ್ ಶೆಟ್ಟಿ, ರೇಖಾ ಶೆಟ್ಟಿ, ಗೋಪಾಲ ಶೆಟ್ಟಿ, ರಾಘವೇಂದ್ರ ನೆಂಪು, ಉಮೇಶ, ಮಂಜು, ಸಚಿನ್, ವಿನುತಾ, ರಾಜು ಸೀತಾ-ಗೀತಾ ಉಪಸ್ಥಿತರಿದ್ದರು.

  • ಕೋಟ ಜನತಾ ಸಮೂಹ ಸಂಸ್ಥೆಯ ಕೇಂದ್ರ ಕಛೇರಿಯಲ್ಲಿ ಸ್ವಾತಂತ್ರ್ಯೋತ್ಸವ

    ಕೋಟ ಜನತಾ ಸಮೂಹ ಸಂಸ್ಥೆಯ ಕೇಂದ್ರ ಕಛೇರಿಯಲ್ಲಿ ಸ್ವಾತಂತ್ರ್ಯೋತ್ಸವ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಕೋಟ ಜನತಾ ಸಮೂಹ ಸಂಸ್ಥೆಯ ಆವರಣದಲ್ಲಿ ಜರಗಿದ ಸ್ವಾತಂತ್ರ್ಯೋತ್ಸವದ ಕಾರ್ಯಕ್ರಮದಲ್ಲಿ ಸಂಸ್ಥೆಯ ಆಡಳಿತ ಮುಖ್ಯಸ್ಥರಾದ ಆನಂದ ಸಿ ಕುಂದರ್ ಅವರು ಧ್ವಜಾರೋಹಣ ನೆರವೇರಿಸಿದರು. ಸ್ವಾತಂತ್ರ್ಯದ ಅಂಗವಾಗಿ ಸಿಬ್ಬಂದಿಗಳು ದೇಶಭಕ್ತಿಯನ್ನು ಮ್ಯೆಗೂಡಿಸಿಕೊಂಡು ಸತ್ಪ್ರಜೆಗಳಾಗಬೇಕೆಂದು ಕರೆ ಇತ್ತರು. ಸಂಸ್ಥೆಯ ನಿರ್ದೇಶಕರುಗಳಾದ ಪ್ರಶಾಂತ ಕುಂದರ್, ರಕ್ಷಿತ್ ಕುಂದರ್ ಮತ್ತು ಸಂಸ್ಥೆಯ ಸಿಬ್ಬಂದಿಗಳು ಹಾಜರಿದ್ದರು.

  • ಯಡ್ತಾಡಿ ಗ್ರಾ.ಪಂ. ಅಧ್ಯಕ್ಷರಾಗಿ ಎಚ್.ಪ್ರಕಾಶ್ ಶೆಟ್ಟಿ, ಉಪಾಧ್ಯಕ್ಷರಾಗಿ ಸುಶೀಲಾ ಆಯ್ಕೆ

    ಯಡ್ತಾಡಿ ಗ್ರಾ.ಪಂ. ಅಧ್ಯಕ್ಷರಾಗಿ ಎಚ್.ಪ್ರಕಾಶ್ ಶೆಟ್ಟಿ, ಉಪಾಧ್ಯಕ್ಷರಾಗಿ ಸುಶೀಲಾ ಆಯ್ಕೆ

    ಕುಂದಾಪುರ ಮಿರರ್ ಸುದ್ದಿ..

    ಕೋಟ: ಯಡ್ತಾಡಿ ಗ್ರಾ.ಪಂ. ನೂತನ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಎಚ್.ಪ್ರಕಾಶ್ ಶೆಟ್ಟಿ, ಉಪಾಧ್ಯಕ್ಷರಾಗಿ ಸುಶೀಲಾ ಆಯ್ಕೆಯಾಗಿದ್ದಾರೆ.

    ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ, ಉಪಾಧ್ಯಕ್ಷ ಹಿಂದುಳಿದ ವರ್ಗ ಅ ಮಹಿಳೆಗೆ ಮೀಸಲಾಗಿತ್ತು. ಬಹುಮತ ಹೊಂದಿದ ಬಿಜೆಪಿಯಿಂದ ಎಚ್.ಪ್ರಕಾಶ್ ಶೆಟ್ಟಿ ಹಾಗೂ ಜ್ಯೋತಿ ವಿ. ಹೆಗ್ಡೆ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿದ್ದರು. ರಾಜಿ ಸೂತ್ರಗಳು ಕೈಗೂಡದ ಕಾರಣ ಇಬ್ಬರೂ ನಾಮಪತ್ರ ಸಲ್ಲಿಸಿದರು. ಕೊನೆಯದಾಗಿ ಚುನಾವಣೆಯಲ್ಲಿ ಎಚ್.ಪ್ರಕಾಶ್ ಶೆಟ್ಟಿ 10ಮತಗಳೊಂದಿಗೆ ಜಯಗಳಿಸಿದರು.